ಹೃದಯ-ಸಿರಿ



ಅಚ್ಚು ಮೆಚ್ಚಿನ ನುಡಿಗಳ
ಬಿಚ್ಚಿ ಹೇಳಲು ಕಾತುರ
ಹೊಳೆವ ಮುದ್ದು ಮೊಗವನು
ಕದ್ದು ನೋಡಲು ಆತುರ


                     ಬರುತಿವೆ ಮನದ ಮಾತುಗಳು ಧಾವಿಸಿ
                     ಕುಳಿತಿಹೆ ಕಿವಿಯ ಬಾಗಿಲನು ಬಂಧಿಸಿ !!!
                     ಹೊಳಪನು ಕಾಣಲು ಕಣ್ಣುಗಳು ಕಾದಿವೆ
                     ಕಿರುನಗೆ ಮಲ್ಲಿಗೆ ಅರಳುವುದು ಬೇಡವೇ ??? 


                   
                     ಹೃದಯದ ಖರೀದಿಗೆ ಆಕಾಂಕ್ಷಿ ನಾನು
                     ಭಾವನಾ-ತೋಟ ಬಿಟ್ಟು ಬಳಿಯಿಲ್ಲ ಬೇರೇನು
                     ಮಧುರ-ಗಾಯನದ ಗುಂಗಿಗೆ ಆಗಿಹೆ ಅಲೆಮಾರಿ
                     ನಿನಗಾಗಿ ಮಾನವನಾಗಿಸು ಹೃದಯ-ಸಿರಿ ದಯತೋರಿ . . .


                                                           --- >  ಸುಮನ (ಕೃಷ್ಣ ಹುಯಿಲಗೋಳ)


No comments:

Post a Comment